ಶನಿವಾರ, ಜನವರಿ 16, 2010

ರಾಹು ಕೇತು ಹಾಗು ಗ್ರಹಣ

ಹೌದಲ್ವೇ? ಹಿಂದೂ ಪಂಚಾಂಗದಲ್ಲಿ ಸೂರ್ಯನಿಗೆ ರಾಹು ಅಥವಾ ಕೇತು ಹಿಡಿದಾಗ ಸೂರ್ಯಗ್ರಹಣವಾಗುತ್ತದೆ ಅನ್ನುತ್ತಾರಲ್ಲಾ ಹಾಗಾದರೆ ರಾಹು-ಕೇತು ಗಳು ಯಾರು?  
ನಿಮಗೆಲ್ಲಾ ಸೂರ್ಯ ಚಂದ್ರ ಹಾಗು ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಗ್ರಹಣವಾಗುತ್ತದೆ ಎಂದು ಗೊತ್ತಿದೆ  ಅದ್ರೆ ಚನ್ನಾಗಿ ನೆನಪಿರಲಿ,  ಸೂರ್ಯ ಚಂದ್ರ ಹಾಗು ಭೂಮಿ ಒಂದೇ ಸಮತಲದಲ್ಲೂ ಬಂದಾಗ ಮಾತ್ರ ಗ್ರಹಣವಾಗುತ್ತದೆ ಇಲ್ಲವೆಂದರೆ ಪ್ರತೀ ಅಮವಾಸ್ಯೆಯೂ ಸಹ ಸೂರ್ಯಗ್ರಹಣವಾಗಬೇಕಿತ್ತು
ಪ್ರತೀ ಹುಣ್ಣಿಮೆಯೂ ಸಹ ಚಂದ್ರಗ್ರಹಣವಾಗಬೇಕಿತ್ತು ಆದರೆ ಹಾಗಾಗುವುದಿಲ್ಲ ಏಕೆಂದರೆ ಭೂಮಿ-ಸೂರ್ಯನನ್ನು ಹಾಗು ಚಂದ್ರ-ಭೂಮಿಯನ್ನು ಬೇರೇ ಸಮತಲಗಳಲ್ಲಿ ಸುತ್ತುತ್ತವೆ

ಕೆಲವೊಮ್ಮೆ ಮಾತ್ರ ಆ ಎರಡು ಸಮತಲಗಳು ಸಂಧಿಸುವ ಬಿಂದುಗಳಲ್ಲಿ ಸೂರ್ಯ ಅಥವಾ ಚಂದ್ರ ಬಂದಾಗ ಗ್ರಹಣವಾಗುತ್ತದೆ 

ಸ್ವಲ್ಪಕಾಲ ಭೂಮಿಯ ಸುತ್ತ ಸೂರ್ಯನೂ ಸುತ್ತುತ್ತಾನೆ ಎಂದು ಭಾವಿಸಿ, ಚಂದ್ರನೂ ಮಾಸಕ್ಕೆ ಒಮ್ಮೆ ಸುತ್ತುತ್ತಾನೆ ಅವರಿಬ್ಬರು ಸುತ್ತುವ  ಸಮತಲಗಳು ಸಂಧಿಸುವ ಬಿಂದುಗಳೇ ರಾಹು ಹಾಗು ಕೇತು
(ಭಾರತೀಯ ಹಿಂದೂ ಖಗೋಳವಿಜ್ಞಾನದಲ್ಲಿ  ಭೂಕೇಂದ್ರವಾದವನ್ನು ಸರಿ ಎಂದೇನು ಹೇಳಿಲ್ಲ ಪಂಚಾಗದ ಅನುಕೂಲಕ್ಕಾಗಿ ಮಾತ್ರ ಹಾಗೆ ಬಿಂಬಿಸಲಾಗಿದೆ ಅದು ಬೇರೆಯೇ ವಿಷಯ)

ಕಾಮೆಂಟ್‌ಗಳಿಲ್ಲ: