ಭಾನುವಾರ, ಜನವರಿ 17, 2010

ಗ್ರಹಣ ,ದೇಶಾದ್ಯಂತ ಅಘೋಶಿತ ಕರ್ಫ್ಯೂ,ರಾಜ್ಯದ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ

ನಿನ್ನೆ ತರಕಾರಿ ಕೋಳ್ಳಲು ನಮ್ಮಮ್ಮ ಪೇಟೆಗೇ ಹೋಗಿದ್ದರು
ತರಕಾರಿ ಮಾರುವಾಕೆ "ಕಡಿಮೆ ಬೆಲೆಗೆ ಕೋಡುತ್ತೇನೆ ನಾಳೆ ಏನಂದ್ರೂ ಗ್ರಹಣ ಜನರು ಮನೆ ಬಿಟ್ಟು ಬರುವುದಿಲ್ಲ ಅದಕ್ಕೆ ಅಂಗಡಿ ಮುಚ್ಚುತ್ತೇವೆ ಅಂದರಂತೆ"
ಏನು ಜನ ಮಾರಾಯ್ರೆ ಸ್ವಲ್ಪನೂ ವೈಜ್ಞಾನಿಕ-ಯೋಚನೆ ಬೇಡವಾ
ಗ್ರಹಣ ಬಂತು ಅಂದ್ರೆ ದೇಶಾದ್ಯಂತ ಅಘೋಶಿತ ಕರ್ಫ್ಯೂ ಸಾಮಾನ್ಯ
ಜನ ಮನೆ ಬಿಟ್ಟು ಹೋರ ಬರುವುದಿಲ್ಲ ಅನ್ನುತ್ತಾರೆ. ಇವರಿಗೇನೆನ್ನಬೇಕು?

ರಾಜ್ಯದ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ,ಗ್ರಹಣದ ಬಗ್ಗೆ ಒಂದು ಕನಿಷ್ಟ ಮಾಹಿತಿಯನ್ನೂ
ವಿಧ್ಯಾರ್ಥಿಗಳಿಗೆ ನೀಡದೆ ವಿಜ್ಞಾನ ಕಲಿಸಿದರೆ ಏನು ಉಪಯೋಗ ಅಂತ
ನಮ್ಮ ವಿಜ್ಞಾನ ಬುದ್ದಿ ಏನಂದರೂ ವಿದೇಶೀ-ಬಹುರಾಷ್ಟ್ರಿಯ ಕಂಪನಿಗಳ ಮುಷ್ಠಿಯಲ್ಲಿದೆ
ಕೆಟ್ಟ ಕೆಲಸ ಮಾಡಲು ತನ್ನೇಲ್ಲಾ ಬುದ್ದಿ ಉಪಯೋಗಿಸ್ತಾರೆ ಈ ಜನ

ಶಾಲಾ -ಕಾಲೇಜುಗಳಲ್ಲಿ ಕನಿಷ್ಟ ಗ್ರಹಣದ ಬಗ್ಗೆ ವಿಧ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಆಗ ಬೇಕಿತ್ತು ಕೆಲವರಿಗದರೂ ಅದರ ಬಗ್ಗೆ ಅರಿವಿದೆಯಲ್ಲ ಅಂತ ಸಂತಸಪಡೋಣ

ಕಾಮೆಂಟ್‌ಗಳಿಲ್ಲ: